ನವದೆಹಲಿ: ‘ಸ್ಮೃತಿ ಇರಾನಿ ಮತ್ತು ಅವರ ಮಗಳು ಗೋವಾದಲ್ಲಿ ಯಾವುದೇ ರೆಸ್ಟೋರೆಂಟ್ ಹೊಂದಿಲ್ಲ. ಪರವಾನಗಿ ಪಡೆಯಲು ಈವರೆಗೂ ಯಾವುದೇ ಅರ್ಜಿಯನ್ನೂ ಸಲ್ಲಿಸಿಲ್ಲ’ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
‘ಕಾಂಗ್ರೆಸ್ ಮುಖಂಡರಾದ ಜೈರಾಮ್ ರಮೇಶ್, ಪವನ್ ಖೇರಾ ಹಾಗೂ ನೆಟ್ಟಾ ಡಿಸೋಜಾ ಅವರು ವಾಸ್ತವಾಂಶಗಳನ್ನು ಅರಿಯದೆ ಸ್ಮೃತಿ ಅವರ ವಿರುದ್ಧ ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ’ ಎಂದು ನ್ಯಾಯಾಧೀಶೆ ಮಿನಿ ಪುಷ್ಕರಣಾ ತಿಳಿಸಿದ್ದಾರೆ.
‘ಸ್ಮೃತಿ ಅವರ ತೇಜೋವಧೆ ಮಾಡುವ ಹಾಗೂ ಅವರ ಹೆಸರಿಗೆ ಕಳಂಕ ತರುವ ಉದ್ದೇಶ ಕಾಂಗ್ರೆಸ್ ನಾಯಕರ ಆರೋಪದ ಹಿಂದೆ ಅಡಗಿರುವುದು ಸ್ಪಷ್ಟವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.