ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತ ಹಾಗೂ ರಾಜ್ಯಸಭೆಯಲ್ಲಿ 91 ಸದಸ್ಯರ ಬಲ ಇದ್ದಿದ್ದರಿಂದ ಧನಕರ್ ಅವರ ಗೆಲುವು ನಿಶ್ಚಿತವಾಗಿತ್ತು. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ ಅವರ ನಿವಾಸದಲ್ಲಿ, ಧನಕರ್ ಅವರ ಗೆಲುವು ಘೋಷಣೆಯಾಗುವ ಮುನ್ನವೇ ಸಂಭ್ರಮಾಚರಣೆ ನಡೆದಿತ್ತು. ಇದರಲ್ಲಿ ಧನಕರ್ ಭಾಗಿಯಾಗಿದ್ದರು. ಫಲಿತಾಂಶ ಪ್ರಕಟವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಧನಕರ್ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದರು.