ಸ್ವಪ್ನಾ ಸುರೇಶ್ ಅವರು ಬೆಳಿಗ್ಗೆ ಮಾಡಿದ ಆರೋಪಗಳಿಂದಾಗಿ ರಾಜಕೀಯ ಕೆಸರೆರಚಾಟ ಆರಂಭವಾಯಿತಲ್ಲದೇ, ವಿರೋಧ ಪಕ್ಷಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜೀನಾಮೆಗೆ ಒತ್ತಾಯಿಸಿದವು. ಆದರೆ, ಸಿಪಿಎಂನ ಹಿರಿಯ ನಾಯಕ ಮತ್ತು ಎಲ್ಡಿಎಫ್ನ ಸಂಚಾಲಕ ಇ.ಪಿ.ಜಯರಾಜನ್ ಅವರು ವಿರೋಧ ಪಕ್ಷಗಳ ಬೇಡಿಕೆಯನ್ನು ತಳ್ಳಿಹಾಕಿದರು.