ಸೋಮವಾರ ಇಲ್ಲಿ ಆರಂಭವಾದ ಸಿಪಿಎಂ ನೇತೃತ್ವದ ರಾಜ್ಯವ್ಯಾಪಿ ಜನರ ರಕ್ಷಣಾ ರ್ಯಾಲಿಯ ವೇಳೆ ವರದಿಗಾರರೊಂದಿಗೆ ಮಾತನಾಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ಬಿ. ಗೋವಿಂದನ್ ಅವರು, ‘ಎಡ ಪಕ್ಷವು ಇಸ್ಲಾಮೊಫೋಬಿಯಾ ಹರಡುತ್ತಿದೆ ಎಂದು ಉದ್ದೇಶಪೂರ್ವಕ ಆರೋಪ ಹೊರಿಸಲಾಗುತ್ತಿದೆ. ಇದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಜಮಾತ್-ಇ-ಇಸ್ಲಾಮಿ ತಮ್ಮ ನಿಲುವು ಮರೆಮಾಚಿಕೊಳ್ಳಲು ಮಾಡುತ್ತಿರುವ ತಂತ್ರ’ ಎಂದು ಟೀಕಿಸಿದರು.