ವರದಿಗಳ ಪ್ರಕಾರ, ಕಂದಾಯ ಇಲಾಖೆ ಅಧಿಕಾರಿಗಳು ಸತ್ವಾರಿ ಪ್ರದೇಶದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ತಾಜ್ ಮೊಹಿ–ಉದ್–ದಿನ್ ಅವರಿಗೆ ಸೇರಿದ, ಅಕ್ರಮವಾಗಿ ನಿರ್ಮಿಸಲಾಗಿದ್ದ ಅತಿಥಿಗೃಹ, ಡೇರಿ ಸಂಸ್ಕರಣಾ ಘಟಕವೊಂದನ್ನು ಕೆಡವಲಾಗಿದೆ. ಅಲ್ಲದೆ ಅಂಗಡಿ ಮತ್ತು ಕೆಲವು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ.