ಹೇಮಂತ್ ಸೊರೇನ್ ಅವರ ಭವಿಷ್ಯದ ಕುರಿತು ಹರಡುತ್ತಿರುವ ವದಂತಿಯು, ಚುನಾಯಿತ ಸರ್ಕಾರವೊಂದನ್ನು ಅಸ್ಥಿರಗೊಳಿಸುವ ಪ್ರಯತ್ನಗಳಿಗೆ ಉತ್ತೇಜನ ನೀಡಿದೆ. ಹೇಮಂತ್ ಅವರು ಅನರ್ಹಗೊಂಡರೂ ಸರ್ಕಾರವೇನೂ ಪತನವಾಗದು. ಏಕೆಂದರೆ, ಮೈತ್ರಿಕೂಟವು ಅತ್ಯಂತ ಸ್ಪಷ್ಟ ಬಹುಮತ ಹೊಂದಿದೆ ಎಂದು ನಿಯೋಗವು ರಾಜ್ಯಪಾಲರಿಗೆ ತಿಳಿಸಿದೆ.