ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡಿರುವ ಸಚಿವರು, ತಪ್ಪದೇ ತರಗತಿಗಳಿಗೆ ಹಾಜರಾಗುವುದರ ಜೊತೆಗೆ ತನ್ನ ಜವಾಬ್ದಾರಿಯನ್ನೂ ನಿಭಾಯಿಸುವುದಾಗಿ ತಿಳಿಸಿದರು. ‘ನಾನು ರಾಜಕಾರಣಿಯಾಗಿರುವ ಕಾರಣ, ರಾಜ್ಯಶಾಸ್ತ್ರವನ್ನು ಒಂದು ವಿಷಯವಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ. ಇದರಿಂದ ನನ್ನ ಭವಿಷ್ಯಕ್ಕೂ ಸಹಕಾರಿಯಾಗಲಿದೆ’ ಎಂದರು.