ಒಂದು ವಾರದ ಹಿಂದೆಯಷ್ಟೇತಪಸ್ವಿ ತನ್ನ ಗೆಳತಿಯೊಂದಿಗೆ ಗುಂಟೂರು ಸಮೀಪದ ತಕ್ಕೆಲ್ಲಪಡು ಎಂಬಲ್ಲಿ ವಾಸವಾಗಿದ್ದರು. ಇದನ್ನು ತಿಳಿದ ಜ್ಞಾನೇಶ್ವರ್ ಸೋಮವಾರ ರಾತ್ರಿ ತಪಸ್ವಿಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದ.ಇಬ್ಬರ ನಡುವಿನ ಮಾತುಕತೆ ತಾರಕಕ್ಕೇರಿದ್ದು, ಈ ವೇಳೆ ಜ್ಞಾನೇಶ್ವರ ಸರ್ಜಿಕಲ್ ಚಾಕುವಿನಿಂದ ತಪಸ್ವಿನಿಯ ಕತ್ತು ಸೀಳಿದ್ದ. ಭಯಗೊಂಡಿದ್ದ ತಪಸ್ವಿಯ ಗೆಳತಿ ರಕ್ಷಣೆಗಾಗಿ ನೆರೆಹೊರೆಯವರಿಗೆ ವಿಷಯ ತಿಳಿಸಲು ಹೊರಗೆ ಓಡಿದ್ದರು.