‘ಈ ಪ್ರದೇಶದಲ್ಲಿ ಕಾರ್ಯಾರಣೆ ಮುಂದುವರಿದಿದೆ. ಸೋಮವಾರ ಮುಂಜಾನೆ ಪೂಂಚ್ ಸೆಕ್ಟರ್ನ ಎಲ್ಒಸಿ ಬಳಿ ಉಗ್ರರು ಗಡಿ ದಾಟಲು ಪ್ರಯ್ನತಿಸಿದ್ದಾರೆ. ಸೇನೆಯು ಗಡಿ ದಾಟದಂತೆ ಎಚ್ಚರಿಕೆ ನೀಡಿದರೂ ಉಗ್ರರು ಮುಂದುವರಿದಿದ್ದಾರೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಒಬ್ಬ ಉಗ್ರ ಹತನಾಗಿದ್ದಾನೆ. ಅಲ್ಲಿಂದ ಎಕೆ–47 ರೈಫಲ್ ಸಿಕ್ಕಿದೆ’ ಎಂದು ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಮಾಹಿತಿ ನೀಡಿದರು.