ಸಂಘರ್ಷಪೀಡಿತವಲಯಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾದ ಸಶಸ್ತ್ರ ಪಡೆಗಳ ಸಿಬ್ಬಂದಿಯಲ್ಲಿ ಆತ್ಮಹತ್ಯೆ, ಶಸ್ತ್ರತ್ಯಾಗ ಹಾಗೂ ಸ್ವಂತ ಪಡೆಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸುವ ಮನೋಭಾವಕ್ಕೆ ಹಲವು ಕಾರಣಗಳಿರುತ್ತವೆ. ಇವುಗಳಲ್ಲಿ ಒತ್ತಡ, ಮನೆಗೆ ತೆರಳಲು ರಜೆ ಸಿಗದಿರುವುದು, ಮೇಲಧಿಕಾರಿಗಳೊಂದಿಗಿನ ಸಂವಹನ ಅಂತರವೂ ಕಾರಣ ಎನ್ನುವುದು ತಜ್ಞರ ಅಭಿಮತ.