ವಿದ್ಯಾರ್ಥಿಗಳ ಗುಂಪು ಬಿ.ಆರ್. ಅಂಬೇಡ್ಕರ್ ಗ್ರಂಥಾಲಯಕ್ಕೆ ನುಗ್ಗಿ ಭದ್ರತಾ ಸಿಬ್ಬಂದಿ ಜೊತೆ ಘರ್ಷಣೆ ನಡೆಸಿದೆ. ಬಳಿಕ ಗಾಜಿನ ಬಾಗಿಲನ್ನು ಒಡೆದು, ಗ್ರಂಥಾಲಯದ ಮುಖ್ಯ ಅಧ್ಯಯನ ಕೋಣೆಗೆ ತೆರಳಿದೆ. ಅಂದಿನಿಂದ ಆ ಗುಂಪು ಆ ಕೋಣೆಯಲ್ಲಿಯೇ ಇದೆ.ಗ್ರಂಥಾಲಯಕ್ಕೆ ನುಗ್ಗಿದ ವಿದ್ಯಾರ್ಥಿಗಳು ಕೋವಿಡ್–19 ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿಲ್ಲ. ಮಾಸ್ಕ್ ಧರಿಸಿಲ್ಲ. ಗ್ರಂಥಾಲಯವನ್ನು ಸ್ಯಾನಿಟೈಸ್ ಮಾಡಲು ಅವಕಾಶ ಕೊಡುತ್ತಿಲ್ಲ. ಈ ವಿದ್ಯಾರ್ಥಿಗಳು ಊಟಕ್ಕೆ ಹಾಸ್ಟೆಲ್ಗೆ ಹೋಗಿ ಬರುತ್ತಿದ್ದಾರೆ. ಹಾಗಾಗಿ,ಗ್ರಂಥಾಲಯದ ಸಿಬ್ಬಂದಿ ಮತ್ತು ಹಾಸ್ಟೆಲ್ನಲ್ಲಿ ನೆಲೆಸಿರುವ ವಿದ್ಯಾರ್ಥಿಗಳಿಗೆ ಅನಾರೋಗ್ಯದ ಅಪಾಯ ಎದುರಾಗಿದೆ ಎಂದು ಜೆಎನ್ಯು ಪ್ರಕಟಣೆ ತಿಳಿಸಿದೆ.