ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸೇರಿ ಇಲ್ಲದಿದ್ರೆ ಬುಲ್ಡೋಜರ್‌ ಎದುರಿಸಿ: ಮ.ಪ್ರ ಸಚಿವರ ಬೆದರಿಕೆ

ಚುನಾವಣಾ ಪ್ರಚಾರ ಸಭೆಯಲ್ಲಿ ಸಚಿವರು ಆಡಿದ ಮಾತು ವಿವಾದ
Last Updated 19 ಜನವರಿ 2023, 17:12 IST
ಅಕ್ಷರ ಗಾತ್ರ

ಗುನಾ (ಮಧ್ಯ ‍ಪ್ರದೇಶ): ಒಂದೋ ಬಿಜೆಪಿ ಸೇರಿ ಇಲ್ಲದಿದ್ದರೆ ಮುಖ್ಯಮಂತ್ರಿಯವರ ಬುಲ್ಡೋಜರ್‌ ಎದುರಿಸಲು ಸಜ್ಜಾಗಿ ಎಂದು ಮಧ್ಯಪ್ರದೇಶದ ಸಚಿವವರೊಬ್ಬರು ಕಾಂಗ್ರೆಸ್‌ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಾರೆ.

ಪಂಚಾಯತ್ ಸಚಿವ ಮಹೇಂದ್ರ ಸಿಂಗ್‌ ಸಿಸೋಡಿಯಾ ಅವರೆ ಈ ರೀತಿ ಬೆದರಿಕೆ ಹಾಕಿದವರು.

ರುತಿಯಾನಿ ಎನ್ನುವ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಆಡಿರುವ ಮಾತುಗಳು ವಿಡಿಯೋ ಮುದ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘ಬಿಜೆಪಿ ಸೇರಿ. ಆಡಳಿತ ಪಕ್ಷದ ಕಡೆ ನಿಧಾನವಾಗಿ ಆಗಮಿಸಿ. 2023ರಲ್ಲಿಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮಾಮಾ ಅವರ ಬುಲ್ಡೋಜರ್‌ ತಯಾರಿದೆ‘ ಎಂದು ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಂಡಿದ್ದ ಆರೋಪಿಗಳ ಆಸ್ತಿ–ಪಾಸ್ತಿಗಳನ್ನು ಬುಲ್ಡೋಜರ್‌ ಮೂಲಕ ಧ್ವಂಸ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT