ಲಖನೌ: ‘ಪತ್ರಕರ್ತರು ಸೂಕ್ಷ್ಮವಾದ ಘಟನೆಗಳನ್ನು ನಾಟಕೀಯವಾಗಿ ಬಿಂಬಿಸಿ, ಸುದ್ದಿಯನ್ನು ಸೃಷ್ಟಿಸಲು ಒತ್ತು ನೀಡಬಾರದು’ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಗೆ ನೆರವು ನೀಡಿದ ಆರೋಪದಡಿ ಬಂಧಿಸಲಾಗಿರುವ ಪತ್ರಕರ್ತರೊಬ್ಬರ ಜಾಮೀನು ಅರ್ಜಿಯನ್ನು ಕೋರ್ಟ್ ಇದೇ ಸಂದರ್ಭದಲ್ಲಿ ತಳ್ಳಿಹಾಕಿತು.