ಪಟ್ನಾದ ಹನುಮಾನ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ನಡ್ಡಾ ಅವರು ಬಿಹಾರದಲ್ಲಿ ತಮ್ಮ ಪ್ರಚಾರ ಕಾರ್ಯವನ್ನು ಆರಂಭಿಸಲಿದ್ದಾರೆ. ಬಳಿಕ ಅವರು, ಜಯಪ್ರಕಾಶ್ ನಾರಾಯಣ ಅವರ ಸ್ಮಾರಕದ ಬಳಿ ತೆರಳಿ, ಅಲ್ಲಿ ಜೆಪಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವರು. ಪಟ್ನಾ ವಿಮಾನ ನಿಲ್ದಾಣದಲ್ಲೇ ನಡ್ಡಾ ಅವರಿಗೆ ಭವ್ಯ ಸ್ವಾಗತ ಕೋರಲು ಪಕ್ಷದ ರಾಜ್ಯ ಘಟಕವು ಸಿದ್ಧತೆ ಮಾಡಿಕೊಂಡಿದೆ.