ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರಿಫ್, ‘ರಾಜಕೀಯ ಕಾರಣಕ್ಕಾಗಿಗೋಪಿನಾಥ್ ಅವರು ಕುಲಪತಿ ಹುದ್ದೆಯಲ್ಲಿದ್ದಾರೆ. ನನ್ನನ್ನು ವಿಶ್ವವಿದ್ಯಾಲಯಕ್ಕೆ ಅವರೇ ಆಹ್ವಾನಿಸಿದ್ದರು. ಅಲ್ಲಿ ನನ್ನ ಮೇಲೆ ಹಲ್ಲೆ ಯತ್ನ ನಡೆದಾಗ ಪೊಲೀಸರಿಗೆ ಮಾಹಿತಿ ನೀಡಬೇಕಾಗಿರುವುದು ಅವರ ಕರ್ತವ್ಯವಲ್ಲವೇ? ಆದರೆ ಅವರು ಹಾಗೆ ಮಾಡಲಿಲ್ಲ. ಈ ಸಂಚಿನಲ್ಲಿ ಅವರೂ ಭಾಗಿಯಾಗಿದ್ದಾರೆ’ ಎಂದೂ ಆರೋಪಿಸಿದ್ದಾರೆ.