ಬೆಂಗಳೂರು–ಹೆಜ್ಜಾಲೆ–ಚಾಮ ರಾಜನಗರ ರೈಲು ಮಾರ್ಗದ ಕಾಮಗಾರಿ ಯಾವಾಗ ಆರಂಭವಾಗಿ ಪೂರ್ಣಗೊಳ್ಳುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ‘ಯೋಜನಾ ಮೊತ್ತಕ್ಕೆ ಆಯಾ ರಾಜ್ಯ ಪಾಲು ನೀಡುವುದು, ತ್ವರಿತವಾಗಿ ಭೂಸ್ವಾಧೀನ ಪ್ರಕ್ರಿಯೆ, ಅರಣ್ಯ ಭೂಮಿಗಳ ಸ್ವಾಧೀನಕ್ಕಾಗಿ ಒಪ್ಪಿಗೆ, ವಿವಿಧ ಪ್ರಾಧಿಕಾರಗಳಿಂದ ಅನುಮೋದನೆ, ಭೌಗೋಳಿಕ ಸನ್ನಿವೇಶ, ಕಾನೂನು ಮತ್ತು ಸುವ್ಯವಸ್ಥೆ ಮತ್ತಿತರ ಅಂಶಗಳು ಯಾವುದೇ ರೈಲ್ವೆ ಯೋಜನೆ ಪೂರ್ಣಗೊಳ್ಳುವಲ್ಲಿ ಪರಿಣಾಮ ಬೀರುತ್ತವೆ’ ಎಂದು ತಿಳಿಸಿದ್ದಾರೆ.