ಸಿದ್ದಿಪೇಟೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಕೆಸಿಆರ್ ಸರ್ಕಾರ ಬಂದ ಮೇಲೆ ದೇಶದಾದ್ಯಂತ ಆದಾಯ ತೆರಿಗೆ ಸಡಿಲವಾಗಲಿದ್ದು, ಯಾವುದೇ ದಾಳಿಗಳು ನಡೆಯುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಸಂಪಾದಿಸಬಹುದು. ಕೆಸಿಆರ್ ಅವರು ಜನರು ಸ್ವಯಂ ಪ್ರೇರಿತರಾಗಿ ತೆರಿಗೆ ಪಾವತಿಸುವ ನಿಯಮ ತರುತ್ತಾರೆ. ದೇಶದಲ್ಲಿ ಬದಲಾವಣೆ ಆಗಬೇಕು ಎಂದಿದ್ದಾರೆ.