ಆಲಪ್ಪುಳ: ಸಿಪಿಎಂ ಮತ್ತು ಸಿಪಿಐ ನಿರ್ಮಿಸಿರುವ ಪುನ್ನಪ್ರ ವಯಲಾರ್ ಚಳವಳಿ ಸ್ಮಾರಕಕ್ಕೆ ಬಿಜೆಪಿ ಅಭ್ಯರ್ಥಿ ಸಂದೀಪ್ ವಾಚಸ್ಪತಿ ಅವರು ಪುಷ್ಪ ನಮನ ಸಲ್ಲಿಸಿದ್ದು ವಿವಾದಕ್ಕೆ ಕಾರಣವಾಗಿದೆ. ನಾಮಪತ್ರ ಸಲ್ಲಿಕೆಗೆ ಮೊದಲು ಈ ಸ್ಮಾರಕಕ್ಕೆ ಭೇಟಿ ನೀಡಿದ ಸಂದೀಪ್ ಅವರು, ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದರು.