ಈ ಎಲ್ಲ ಆರೋಪಗಳು ಸುಳ್ಳು. ಆತ ಎನ್ಜಿಒ ಸಂಘಟನೆಯ ಭಾಗವಾಗಿದ್ದಾನೆ ಅಥವಾ ಕಾಂಗ್ರೆಸ್ ಪಕ್ಷದ ಸದಸ್ಯ ಎಂಬುದು ಸುಳ್ಳು ಎಂದು ಚೆನ್ನಿತ್ತಲ ಹೇಳಿದ್ದಾರೆ.
ಈ ಹೇಳಿಕೆ ಖಂಡಿಸಿದ ಕೇರಳದ ಆರೋಗ್ಯ ಸಚಿವೆ ಕೆ.ಕೆ ಶೈಲಜಾ, ಮಹಿಳೆಯರನ್ನು ಅವಮಾನಿಸಿ ಹೇಳಿಕೆ ನೀಡಿರುವ ಚೆನ್ನಿತ್ತಲ ಕ್ಷಮೆ ಕೇಳಬೇಕು. ಮಹಿಳೆಗೆ ಕಿರುಕುಳ ನೀಡಿದ ಅಥವಾ ಅವಮಾನಿಸಿದ ವ್ಯಕ್ತಿಗಳನ್ನು ಆರೋಗ್ಯ ಇಲಾಖೆಯಿಂದ ತೆಗೆದುಹಾಕಲಾಗುವುದುಎಂದಿದ್ದಾರೆ.
ಇತ್ತೀಚೆಗೆ ಕೇರಳದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಆರೋಗ್ಯ ಇಲಾಖೆಯಿಂದ ವಜಾ ಮಾಡಲಾಗಿದೆ.