ಕಾಡು ಹಂದಿ ಹತ್ಯೆಗೆ ಕೇರಳ ಸರ್ಕಾರ ಅನುಮತಿ: ಪ್ರಾಣಿಪ್ರಿಯರ ಆಕ್ಷೇಪ

ಬೆಂಗಳೂರು: ಬೆಳೆ ಹಾನಿ ಮಾಡುವ ಹಾಗೂ ಮನುಷ್ಯನ ಜೀವಕ್ಕೆ ಅಪಾಯ ತರಬಲ್ಲ ಕಾಡು ಹಂದಿಗಳ ಹತ್ಯೆಗೆ ಕೇರಳ ಸರ್ಕಾರ ಅನುಮತಿ ನೀಡಿದೆ.
ಸ್ಥಳೀಯಾಡಳಿತದ ಅನುಮತಿಯೊಂದಿಗೆ ಜನರು ಕಾಡು ಹಂದಿಯನ್ನು ಕೊಲ್ಲಲು ಸರ್ಕಾರ ಸೂಚನೆ ನೀಡಿರುವುದರ ವಿರುದ್ಧ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಡು ಪ್ರದೇಶದ ಸಮೀಪದಲ್ಲಿ ವಾಸಿಸುವ ರೈತರು ಮತ್ತು ಜನರು, ಕಾಡುಹಂದಿಗಳಿಂದ ತಮಗೆ ಉಂಟಾಗುತ್ತಿರುವ ತೊಂದರೆ, ಬೆಳೆ ಹಾನಿ ಕುರಿತು ಸರ್ಕಾರಕ್ಕೆ ದೂರು ನೀಡಿದ್ದರು.
ಅದರ ಸಲುವಾಗಿ ಕ್ರಮಕ್ಕೆ ಮುಂದಾಗಿರುವ ಸರ್ಕಾರ, ಯಾವ ಪ್ರದೇಶಗಳಲ್ಲಿ ಕಾಡು ಹಂದಿ ಉಪಟಳವಿದೆಯೋ, ಅಲ್ಲಿ ಹತ್ಯೆ ಮಾಡಬಹುದು ಎಂದು ಸ್ಥಳೀಯಾಡಳಿತಕ್ಕೆ ಸೂಚನೆ ನೀಡಿದೆ.
ಆದರೆ ಸರ್ಕಾರದ ಆದೇಶಕ್ಕೆ ಪ್ರಾಣಿಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಳೆ ಹಾನಿಯ ನೆಪವೊಡ್ಡಿ ಕಾಡು ಹಂದಿಗಳ ಹತ್ಯೆಗೆ ಸರ್ಕಾರ ಅನುಮತಿ ನೀಡಿರುವುದು ಸರಿಯಲ್ಲ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.