ಕೊಚ್ಚಿ (ಕೇರಳ): ಅತ್ಯಂತ ಕ್ರೂರ ಕೃತ್ಯವೊಂದರಲ್ಲಿ, ಸಾಕು ನಾಯಿಯನ್ನು ಕಾರಿಗೆ ಕಟ್ಟಿ ಹಾಕಿ ರಸ್ತೆಯಲ್ಲಿ ಎಳೆದಾಡಿದ ವ್ಯಕ್ತಿಯೊಬ್ಬನನ್ನುಕೇರಳದಲ್ಲಿ ಬಂಧಿಸಲಾಗಿದೆ.
ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನೊಬ್ಬ ಇದನ್ನು ಪ್ರತಿಭಟಿಸಿದ ಬಳಿಕ ಆಪಾದಿತ ವ್ಯಕ್ತಿ ಕೌರ್ಯ ಕೃತ್ಯವನ್ನು ಕೊನೆಗೊಳಿಸಿದರು.
ಪ್ರಸ್ತುತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರಾಣಿ ದಯಾಪರ ಸೇರಿದಂತೆ ಸಾಮಾಜಿಕ ವಲಯಗಳಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಸಾಕು ನಾಯಿಯ ಮೇಲೆ ಕರುಣೆಯಿಲ್ಲದೆ ಇಂತಹ ನಿರ್ದಯ ಕೃತ್ಯ ಎಸಗಿರುವ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ದೂರು ದಾಖಲಿಸಿದರು.