ಈ ಪ್ರಕರಣದಲ್ಲಿ ವಾದ ಮಂಡಿಸಲು ತಾವು ಸಿದ್ಧರಿರುವುದಾಗಿ ಸಿಬಿಐ ಪರ ವಕೀಲ ರಾಜೀವ್ ಸಿನ್ಹಾ ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಅವರು ಸಲ್ಲಿಸಿರುವ ದಾಖಲೆ ಪತ್ರಗಳು ಇನ್ನೂ ನ್ಯಾಯಾಲಯಕ್ಕೆ ತಲುಪಿಲ್ಲ. ಹೀಗಿರುವಾಗ ವಾದ ಮಂಡಿಸುವುದರಲ್ಲಿ ಅರ್ಥವೇ ಇಲ್ಲ ಎಂದು ಲಾಲು ಪರ ವಕೀಲರಾದ ಕಪಿಲ್ ಸಿಬಲ್ ಹೇಳಿದರು. ಹೀಗಾಗಿ ವಿಚಾರಣೆಯನ್ನು ಮುಂದಕ್ಕೆ ಹಾಕಲಾಯಿತು.