ಈ ಹಿಂದೆ ನಡೆದಿದ್ದ ಸಭೆಯಲ್ಲಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಕಾಸಿಮ್ ಇರಿಕ್ಕೂರ್ ಟಿಪ್ಪಣಿ ರಚಿಸುವಾಗ ಇಬ್ಬರು ಮುಖಂಡರ ಹೆಸರು ಕೈಬಿಟ್ಟಿದ್ದರು. ಭಾನುವಾರ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಎ. ಪಿ. ಅಬ್ದುಲ್ ವಹಾಬ್ ಅವರ ಬಣ ಇರಿಕ್ಕೂರ್ ಅವರ ಕ್ರಮವನ್ನು ಪ್ರಶ್ನಿಸಿತು. ಆಗ ಅಲ್ಲಿ ವಾಗ್ಯುದ್ಧ ಆರಂಭವಾಯಿತು. ಇರಿಕ್ಕೂರ್ ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆಎಂದು ಆರೋಪಿಸಿ ವಹಾಬ್ ಬಣ ಸಭೆಯನ್ನು ಬಹಿಷ್ಕರಿಸಿತು. ಬಂದರು ಸಚಿವ ಅಹಮ್ಮದ್ ದೇವರ್ಕೋವಿಲ್ ಅವರು ಈ ವೇಳೆ ಹಾಜರಿದ್ದರು.