ರಾಂಚಿ: ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಗುರುವಾರ ನಕ್ಸಲರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ನಡೆಸಿದ ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಜಾರ್ಖಂಡ್ನ ರಾಂಚಿ ಜಿಲ್ಲೆಯ ಹೋಯಹತು ಹಳ್ಳಿಯಲ್ಲಿ ಬೆಳಿಗ್ಗೆ 8.45ರಲ್ಲಿ ಈ ಘಟನೆ ಸಂಭವಿಸಿದೆ. ರಾಜ್ಯ ಪೊಲೀಸ್ ಇಲಾಖೆಯ ಜಾರ್ಖಂಡ್ ಜಾಗ್ವಾರ್ಸ್ ವಿಭಾಗದ ವಿಶೇಷ ಘಟಕದ ಇಬ್ಬರು ಅಧಿಕಾರಿಗಳು ಘಟನೆಯಲ್ಲಿ ಹತರಾಗಿದ್ದಾರೆ. ಜಾರ್ಖಂಡ್ ಜಾಗ್ವರ್ಸ್ ಮತ್ತು ಸಿಆರ್ಪಿಎಫ್ನ ಒಬ್ಬರು ಸ್ಫೋಟದಲ್ಲಿ ಗಾಯಗೊಂಡಿದ್ದಾರೆ.