ಸಾಮಾನ್ಯ ಜನರಿಗೆ ಆದಷ್ಟು ಬೇಗನೆ ಪ್ರಯೋಜನ ದೊರಕುವಂತೆ ಕೇಂದ್ರವು ತನ್ನ ನಿರ್ಧಾರವನ್ನು ಜಾರಿಗೆ ತರಬೇಕು. ಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಸರ್ಕಾರವು ತಮ್ಮ ಪರವಾಗಿ ನಿರ್ಧಾರ ಕೈಗೊಂಡಿದೆ ಎಂಬುದು ಜನರಿಗೆ ತಿಳಿದಿದೆ. ಆದರೆ, ಅದರ ಫಲಿತಾಂಶ ಅವರಿಗೆ ದೊರೆಯುವಂತೆ ಆಗಬೇಕು ಎಂದು ಪೀಠವು ಹೇಳಿದೆ.