ಮಂಗಳವಾರ ಲೋಕಸಭೆಯಲ್ಲಿ 'ರಾಷ್ಟ್ರಪತಿಗಳ ಭಾಷಣದ ಧನ್ಯವಾದ ನಿರ್ಣಯ'ದ ನಂತರ ಭಾಷಣ ಮಾಡಿದ ರಾಹುಲ್ ಗಾಂಧಿ ಅವರು, ಹಿಂಡೆನ್ಬರ್ಗ್-ಅದಾನಿ ವಿಷಯದ ಕುರಿತು ಪ್ರತಿಕ್ರಿಯಿಸಿ ಟೀಕಿಸಿದ್ದರು. ಇದಕ್ಕೆ ಬಿಜೆಪಿಯ ದುಬೆ ಮತ್ತು ಜೋಶಿ, ರಾಹುಲ್ ವಿರುದ್ಧ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ನೋಟಿಸ್ ಸಲ್ಲಿಸಿದ್ದು, ನೋಟಿಸ್ನಲ್ಲಿ ರಾಹುಲ್ ಅವರ ಹೇಳಿಕೆಗಳು ಆಧಾರರಹಿತವಾಗಿವೆ ಹಾಗೂ ಅಸಂಸದೀಯ ಮತ್ತು ಅವಮಾನಕರ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದರು.