‘ಶನಿವಾರದವರೆಗೆ 1,240ಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿವೆ. ಈವರೆಗೂ 5.74 ಲಕ್ಷಕ್ಕೂ ಅಧಿಕ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಕಚ್, ಜಾಮ್ನಗರ, ದೇವಭೂಮಿ ದ್ವಾರಕ, ರಾಜ್ಕೋಟ್, ಪೋರಬಂದರ್, ಮೊರ್ಬಿ, ಸುರೇಂದ್ರನಗರ, ಅಮ್ರೇಲಿ, ಭಾವ್ನಗರ, ಬೋಟಾದ್, ಜುನಾಘಡ, ಗಿರ್ ಸೋಮನಾಥ, ಬನಸ್ಕಾಂತ, ಪಠಾಣ್, ಸೂರತ್, ಅರಾವಳಿ ಮತ್ತು ಪಂಚಮಹಲ್ ಜಿಲ್ಲೆಗಳಲ್ಲಿ ರೋಗ ಉಲ್ಬಣಿಸಿದೆ’ ಎಂದು ಕೃಷಿ ಮತ್ತು ಪಶುಸಂಗೋಪನಾ ಸಚಿವ ರಾಘವ್ಜೀ ಪಟೇಲ್ ತಿಳಿಸಿದ್ದಾರೆ.