‘12 ದಿನಗಳ ಹಿಂದೆ ಕಲಾವತಿ ಅವರನ್ನು ಇಂದೋರ್ನ ಶಲ್ಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿತ್ತು.ಕಲಾವತಿ ಅವರ ಶ್ವಾಸಕೋಶ ಶೇಕಡ 70ರಷ್ಟು ಸೋಂಕಿಗೆ ಒಳಾಗಾಗಿತ್ತು. ಅವರಿಗೆ ವೆಂಟಿಲೇಟರ್ ನೆರವು ನೀಡಲಾಗಿತ್ತು. ಅಲ್ಲದೆ ಅವರ ಸ್ಥಿತಿಯು ಪ್ರತಿನಿತ್ಯ ಕ್ಷೀಣಿಸುತ್ತಿತ್ತು. ಅವರನ್ನು ಉಳಿಸಲು ನಮಗೆ ಸಾಧ್ಯವಾಗಿಲ್ಲ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಿವೇಕ್ ಜೋಶಿ ಅವರು ತಿಳಿಸಿದರು.