‘ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳವನ್ನು ಕೂಡಲೇ ಕಳಿಸಿಲ್ಲ. ಒಂದು ವೇಳೆ ಅಗ್ನಿಶಾಮಕ ದಳವು ತಕ್ಷಣ ಗ್ರಾಮಕ್ಕೆ ತೆರಳಿ ಬೆಂಕಿ ನಂದಿಸುವ ಕೆಲಸ ಮಾಡಿದ್ದರೆ ಜನರ ಪ್ರಾಣ ಉಳಿಯುತ್ತಿತ್ತು.ಸರ್ಕಾರ ನೇತೃತ್ವದಲ್ಲಿ ನಡೆಯುತ್ತಿರುವ ವಸೂಲಿ, ಗೂಂಡಾ ತೆರಿಗೆ, ಭ್ರಷ್ಟಾಚಾರವು
ಈ ಹಿಂಸಾಚಾರಕ್ಕೆ ಕಾರಣವಾದ ಪ್ರಮುಖ ಅಂಶಗಳು. ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳಿಗೆ ಕಾನೂನನ್ನು ಪಾಲಿಸಲು ಕೇಂದ್ರ ಸರ್ಕಾರ ಸೂಚಿಸಬೇಕು’ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.