ಪುಣೆ: ಜಿಲ್ಲೆಯ ಕನ್ಹೆ ಗ್ರಾಮದ ಬಳಿ ಶನಿವಾರ ನಸುಕಿನಲ್ಲಿ ಮಿನಿ ಟ್ರಕ್ವೊಂದು ಪಾದಯಾತ್ರೆ ಹೊರಟಿದ್ದವರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಾರಕರಿಗಳು (ಪಂಢರಪುರದ ವಿಠ್ಠಲ ದೇವರ ಭಕ್ತರು ) ಮೃತಪಟ್ಟು, 13 ಜನರು ಗಾಯಗೊಂಡಿದ್ದಾರೆ.
ರಾಯಗಡ ಜಿಲ್ಲೆಯ ವಾರಕರಿಗಳು ಪುಣೆಯಿಂದ 25 ಕಿ.ಮೀ. ದೂರದಲ್ಲಿರುವ ಆಳಂದಿಗೆ ತೆರಳುತ್ತಿದ್ದರು.
‘ಹಳೆ ಮುಂಬೈ–ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾರಕರಿಗಳು ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 15 ಜನರು ಗಾಯಗೊಂಡರು. ಅವರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಯಿತು. ಗಾಯಗೊಂಡರ ಪೈಕಿ ಇಬ್ಬರು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮೃತಪಟ್ಟರು’ ಎಂದು ಪೊಲೀಸ್ ಅಧಿಕಾರಿ ವಿಲಾಸ್ ಭೋಸ್ಲೆ ತಿಳಿಸಿದರು.
ಮಿನಿ ಟ್ರಕ್ ಚಾಲಕನ್ನು ಬಂಧಿಸಲಾಗಿದೆ ಎಂದೂ ಅವರು ಹೇಳಿದರು.