‘ಕೇರಳದಲ್ಲಿ ಬಹುಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಇದ್ದಾರೆ. ಆ ರಾಜ್ಯದಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿ ಹೇಗೆ ಸಾಕ್ಷರರಾಗಿದ್ದಾರೆ, ಅಲ್ಲಿನ ಮುಖ್ಯಭಾಷೆಗೆ ಹೇಗೆ ಬೆಂಬಲ ನೀಡುತ್ತಿದ್ದಾರೆ ಮತ್ತು ಇದರಿಂದ ಅವರಿಗೆ ಆಗುತ್ತಿರುವ ಪ್ರಯೋಜನಗಳೇನು ಎಂಬ ಬಗ್ಗೆ ಅಧ್ಯಯನ ಮಾಡುವ ಅಗತ್ಯವಿದೆ. ದೇಶದಲ್ಲಿ ಎಲ್ಲ ಸಮುದಾಯಗಳಿಗೂ ನಿರುದ್ಯೋಗವು ಸಮಸ್ಯೆಯಾಗಿದೆ. ಮುಸ್ಲಿಮರಿಗೆ ಬೆಂಬಲ ಮತ್ತು ಸಮಾನ ಅವಕಾಶ ನೀಡಿದರೆ ಅವರು ಉರ್ದು ಭಾಷೆಯ ಮೂಲಕ ಕಲೆ, ಕಾವ್ಯ ಮತ್ತು ಬರವಣಿಗೆ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆ ನೀಡಬಹುದು’ ಎಂದು ಅಭಿಪ್ರಾಯಪಟ್ಟರು.