ಸುದ್ದಿವಾಹಿನಿಯೊಂದರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಚಿವ ಸಂದೀಪನ್ ಭುಮರೆ, ‘ಶಿವಸೇನಾ ನಾಯಕತ್ವದ ಬಗ್ಗೆ ನಮ್ಮ ತಕರಾರಿಲ್ಲ. ನಾವು ನಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಳಿ ಪ್ರಸ್ತಾಪಿಸಿದ್ದೇವೆ. ಎನ್ಸಿಪಿ ಹಾಗೂ ಕಾಂಗ್ರೆಸ್ ಸಚಿವರ ಜತೆ ಕೆಲಸ ಮಾಡುವುದು ಕಷ್ಟಕರವಾಗಿದೆ. ನಮ್ಮ ಪ್ರಸ್ತಾವನೆಗಳು ಮತ್ತು ಕೆಲಸದ ಮನವಿಗಳಿಗೆ ಆ ಪಕ್ಷಗಳ ಸಚಿವರಿಂದ ಅನುಮೋದನೆ ಪಡೆಯುವುದು ನಮಗೆ ತುಂಬಾ ಕಷ್ಟಕರವಾಗುತ್ತಿದೆ’ ಎಂದು ಹೇಳಿದ್ದಾರೆ.