ನಾಗ್ಪುರ: ಚಿತೆಗೆ ಅಗ್ನಿ ಸ್ಪರ್ಶ ಮಾಡುವ ವೇಳೆ ಡೀಸೆಲ್ ಕ್ಯಾನ್ಗೆ ಬೆಂಕಿ ತಗುಲಿ ಇಬ್ಬರು ಮೃತಪಟ್ಟು, ಒಬ್ಬ ವ್ಯಕ್ತಿ ಗಾಯಗೊಂಡ ದಾರುಣ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಾಮ್ಠಿ ಎಂಬಲ್ಲಿ ನಡೆದಿದೆ.
ಕಾಮ್ಠಿಯ ಮೋಕ್ಷಧಾಮ್ ಘಾಟ್ನಲ್ಲಿ ಗುರುವಾರ ಸಂಜೆ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು ವ್ಯಕ್ತಿಯೊಬ್ಬರ ಅಂತ್ಯ ಸಂಸ್ಕಾರಕ್ಕೆ ತೆರಳಿದ್ದರು. ಚಿತೆಗೆ ಅಗ್ನಿ ಸ್ಪರ್ಶ ಮಾಡುವುದಕ್ಕೆ ಡೀಸೆಲ್ ಬಳಸಲಾಗಿತ್ತು. ಡೀಸೆಲ್ ಕ್ಯಾನ್ ತೆರೆದಾಗ ಬೆಂಕಿಹೊತ್ತಿಕೊಂಡಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.