ನವದೆಹಲಿ: ರಾಜ್ಯಸಭೆಗೆ ಜೂನ್ 10 ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿಮಲ್ಲಿಕಾರ್ಜುನ ಖರ್ಗೆ ಅವರನ್ನು ಮಹಾರಾಷ್ಟ್ರಕ್ಕೆ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಸೂಚನೆ ನೀಡಿದ್ದು, ಭೂಪೇಶ್ ಬಘೇಲ್ ಮತ್ತು ರಾಜೀವ್ ಶುಕ್ಲಾ ಅವರನ್ನು ಹರಿಯಾಣಕ್ಕೆ ಹಾಗೂ ಪವನ್ ಕುಮಾರ್ ಬನ್ಸಾಲ್ ಮತ್ತು ಟಿ.ಎಸ್.ಸಿಂಗ್ ದೇವ್ ಅವರನ್ನು ರಾಜಸ್ಥಾನಕ್ಕೆ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.