ಗೋವಾದಲ್ಲಿ ಟಿಎಂಸಿ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಾನು ನಿಮ್ಮ ಸಹೋದರಿ ಇದ್ದಂತೆ. ಅಧಿಕಾರ ಹಿಡಿಯಲು ನಾನು ಇಲ್ಲಿಗೆ ಬಂದಿಲ್ಲ. ಜನರು ತೊಂದರೆಯನ್ನು ಎದುರಿಸುತ್ತಿರುವಾಗ ಸಹಾಯ ಮಾಡಿದರೆ ಅದು ನನ್ನ ಹೃದಯವನ್ನು ತಲುಪುತ್ತದೆ. ನಿಮ್ಮ ಕೆಲಸವನ್ನು ನೀವು ಮಾಡುತ್ತೀರಿ. ಆ ಪ್ರಕ್ರಿಯೆಯಲ್ಲಿ ನಾನು ನಿಮಗೆ ಸಹಾಯವನ್ನಷ್ಟೇ ಮಾಡಲು ಬಯಸುತ್ತೇನೆ' ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.