ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ತನ್ನ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮರುನೇಮಕ ಮಾಡಿದ್ದಾರೆ. ಮಮತಾ, ಅಭಿಷೇಕ್ ಮಧ್ಯೆ ಬಿರುಕು ಮೂಡಿದೆ ಎಂಬ ಊಹಪೋಹಗಳಿಗೆ ತೆರೆಬಿದ್ದಿದೆ.
ಹೊಸದಾಗಿ ಸಮಿತಿ ರಚಿಸುವುದಾಗಿಮಮತಾ ಅವರು ಕಳೆದ ವಾರವಷ್ಟೇ ಹೇಳಿದ್ದರು. ಅದರಂತೆ ಸಮಿತಿ ರಚಿಸಲಾಗಿದೆ.