ರೈತರ ಪ್ರತಿಭಟನೆಗಳಿಂದ ದೂರ ಉಳಿಯದಿದ್ದರೆ ರಾಕೇಶ್ ಟಿಕಾಯತ್ ಮತ್ತು ಅವರ ಕುಟುಂಬವನ್ನು ಬಾಂಬಿಟ್ಟು ಸ್ಫೋಟಿಸುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದ. ಈ ಕುರಿತು ರಾಕೇಶ್ ಟಿಕಾಯತ್ ಅವರ ಸಹೋದರ, ಬಿಕೆಯು ಅಧ್ಯಕ್ಷ ನರೇಶ್ ಟಿಕಾಯತ್ ಅವರ ಮಗ ಗೌರವ್ ಟಿಕಾಯತ್ ಅವರು ಶುಕ್ರವಾರ ದೂರು ದಾಖಲಿಸಿದ್ದರು.