ಟ್ರಕ್ ವೇಗವಾಗಿ ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಉದಿತ್ ನಾರಾಯಣ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಮಗು ಸ್ಕೂಟಿ ಸಮೇತವಾಗಿ ಟ್ರಕ್ ಅಡಿಗೆ ಸಿಲುಕಿಕೊಂಡಿದೆ. ಚಾಲಕ ಸುಮಾರು ಎರಡು ಕಿ.ಮೀ ದೂರ ಟ್ರಕ್ ಚಾಲನೆ ಮಾಡಿಕೊಂಡು ಹೋಗಿದ್ದು, ಟ್ರಕ್ ಅಡಿಯಲ್ಲಿದ್ದ ಬಾಲಕನನ್ನು ಎಳೆದುಕೊಂಡು ಹೋಗಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.