ಕೋವಿಡ್ ಮಾರ್ಗಸೂಚಿಗಳನ್ವಯ ಆರಂಭವಾದ ಪೂಜೆಯಲ್ಲಿ ಭಾಗವಹಿಸಿದ್ದ ಸೀಮಿತ ಸಂಖ್ಯೆಯ ಭಕ್ತರು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಘೋಷಣೆಗಳನ್ನು ಕೂಗಿದರು. ಕಲಭ ಅಭಿಷೇಕ ಮತ್ತು ಕಲಶ ಅಭಿಷೇಕದಂತಹ ಧಾರ್ಮಿಕ ವಿಧಿವಿಧಾನಗಳಿಗೆ ಜನರು ಸಾಕ್ಷಿಯಾದರು. ಈ ವೇಳೆ ಅಯ್ಯಪ್ಪ ಸ್ವಾಮಿಯ ಸ್ವರ್ಣ ವೇಷಭೂಷಣಗಳ ಅಲಂಕಾರವಾದ ತಂಗ ಅಂಗಿಯನ್ನು ಕಣ್ತುಂಬಿಕೊಂಡರು. ಅರನ್ಮುಳದ ಶ್ರೀ ಪಾರ್ಥಸಾರಥಿ ದೇವಸ್ಥಾನದಿಂದ ತಂಗ ಅಂಗಿಯನ್ನು ಶನಿವಾರ ಸಂಜೆ ಮೆರವಣಿಗೆಯ ಮೂಲಕ ಇಲ್ಲಿಗೆ ತರಲಾಗಿತ್ತು.