ಇಲ್ಲಿನ ರಾಜಭವನದಲ್ಲಿ ಸಾಹಾ ಅವರಿಗೆ ರಾಜ್ಯಪಾಲ ಎಸ್.ಎನ್.ಆರ್ಯ ಪ್ರಮಾಣವಚನ ಬೋಧಿಸಿದರು. ತ್ರಿಪುರಾದಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಶನಿವಾರ ಸಂಜೆ ಬಿಪ್ಲಬ್ ದೇಬ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ತುರ್ತುಸಭೆಯಲ್ಲಿ ಮಾಣಿಕ್ ಸಾಹಾ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು.