ಗುವಾಹಟಿ: ಕಲ್ಲಿದ್ದಲು ಗಣಿಯಲ್ಲಿ ನಡೆದ ಅವಘಡದಲ್ಲಿ ಆರು ಮಂದಿ ಮೃತಪಟ್ಟಿರುವ ಘಟನೆ ಮೇಘಾಲಯದ ಈಸ್ಟ್ ಜೈಂತಿಯಾ ಹಿಲ್ ಜಿಲ್ಲೆಯಲ್ಲಿ ನಡೆದಿದೆ. ಸುರಂಗ ತೋಡುವ ಕಾರ್ಯದಲ್ಲಿ ಕಾರ್ಮಿಕರು ನಿರತರಾಗಿದ್ದಾಗ ಅವಘಡ ನಡೆದಿದೆ.
ಆರು ಶವಗಳನ್ನು ಸ್ಥಳದಿಂದ ತೆಗೆಯಲಾಗಿದ್ದು, ಈ ಪೈಕಿ ಐವರ ಗುರುತು ಪತ್ತೆ ಹಚ್ಚಲಾಗಿದೆ. ಆರೂ ಮಂದಿ ನೆರೆಯ ಅಸ್ಸಾಂ ರಾಜ್ಯದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಿಂಬೈ ವಲಯದ ದೀನ್ಸಲ ಗ್ರಾಮದಲ್ಲಿ ಅವಘಡ ನಡೆದಿದೆ. ಸುರಂಗ ತೋಡಲು ಬಳಸುತ್ತಿದ್ದ ಯಂತ್ರ ಕುಸಿದಿದ್ದು, ಆಳವಾದ ಕಂದಕಕ್ಕೆ ಬಿದ್ದಿದೆ. ಗಣಿಯ ಮಾಲೀಕನನ್ನು ಗುರುತಿಸುವ ಹಾಗೂ ಅವಘಡಕ್ಕೆ ಕಾರಣ ತಿಳಿಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.