ಬಿಜಾಪುರ ಜಿಲ್ಲೆಯಲ್ಲಿ ವಿಭಾಗೀಯ ಸಮಿತಿ ಸದಸ್ಯ ಮೋಡಿಯಂ ವಿಜ್ಜಾ ಎಂಬಾತನನ್ನು ಆತನ ಗಂಗಲೂರು ಪ್ರದೇಶ ಸಮಿತಿಗೆ ಸೇರಿದ ಸದಸ್ಯರೇ ಹತ್ಯೆ ಮಾಡಿದ್ದಾರೆ. ಪಶ್ಚಿಮ ಬಸ್ತಾರ್ ವಿಭಾಗೀಯ ಪ್ರದೇಶದಲ್ಲಿ ನಡೆದ ಹೆಚ್ಚಿನ ನಾಗರಿಕ ಹತ್ಯೆಗಳ ಹಿಂದೆ ವಿಜ್ಜಾ ಕೈವಾಡ ಇತ್ತು ಎಂದು ಛತ್ತೀಸಗಡದ ಬಸ್ತಾರ್ ಪ್ರದೇಶದ ಐಜಿಪಿ ಪಿ. ಸುಂದರ್ರಾಜ್ ತಿಳಿಸಿದ್ದಾರೆ.