ಈ ಕುರಿತು ಪ್ರಕಟವಾದ ಸುದ್ದಿಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಶ್ರೀಲಂಕಾ ನ್ಯಾಯಾಲಯ ಮೀನುಗಾರರಿಂದ ವಶಪಡಿಸಿಕೊಂಡ 121 ದೋಣಿಗಳನ್ನು ನಾಶಮಾಡಲು ಆದೇಶಿಸಿದೆ. ಇದು ಆಘಾತಕಾರಿ ಸಂಗತಿ‘ ಎಂದಿದ್ದಾರೆ. ಶ್ರೀಲಂಕಾ ವಶದಲ್ಲಿರುವ 100ಕ್ಕೂ ಹೆಚ್ಚು ದೋಣಿಗಳಲ್ಲಿ, 88 ರಾಮೇಶ್ವರಂಗೆ ಸೇರಿವೆ ಎಂದು ವೈಕೊ, ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.