ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಗಾ ಉತ್ಸವ: ಮಾಂಸದ ಅಂಗಡಿ ಮುಚ್ಚಲು ಒತ್ತಾಯ

Last Updated 5 ಏಪ್ರಿಲ್ 2022, 15:13 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ರಾಮನವಮಿ ಸಮಯದಲ್ಲಿ ಆಚರಿಸುವ ದುರ್ಗಾದೇವಿ ಆರಾಧನೆಯ ವೇಳೆ (ದೆಹಲಿ ಭಾಗದಲ್ಲಿ ನವರಾತ್ರಿ ಎಂದು ಖ್ಯಾತ) ವೇಳೆ ಮಾಂಸದ ಅಂಗಡಿಗಳನ್ನು ತೆರೆಯಬಾರದು ಎಂದು ನಿರ್ದೇಶಿಸಿದ ದಕ್ಷಿಣ ದೆಹಲಿಯ ಮೇಯರ್ ಕ್ರಮವನ್ನು ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರು ಸಮರ್ಥಿಸಿಕೊಂಡಿದ್ದಾರೆ.

ಇಂಥದ್ದೇ ನಿರ್ಬಂಧ ಕ್ರಮಗಳನ್ನು ದೇಶದಾದ್ಯಂತ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

‘ಮುಸ್ಲಿಮರು ಪ್ರಚೋದನಕಾರಿ ಹೇಳಿಕೆಗಳಿಂದ ಪ್ರಭಾವಿತರಾಗಬಾರದು. ಜೊತೆಗೆ ಹಿಂದೂ ಹಬ್ಬವನ್ನು ಗೌರವಿಸಿ, ದಕ್ಷಿಣ ದೆಹಲಿ ಪೌರಾಡಳಿತ ಕೈಗೊಂಡ ಕ್ರಮವನ್ನು ಸ್ವಾಗತಿಸಬೇಕು’ ಎಂದು ಹೇಳಿದ್ದಾರೆ.

ನವರಾತ್ರಿ ಪ್ರಯುಕ್ತ ಏಪ್ರಿಲ್ 11ರವರೆಗೆ ಮಾಂಸದ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ ಎಂದು ಮೇಯರ್ ಮುಕೇಶ್ ಸೂರ್ಯನ್ ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT