ನವದೆಹಲಿ: ಮುಂಬರುವ ಮೇಘಾಲಯ ವಿಧಾನಸಭೆ ಚುನಾವಣೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ. ನಿರುದ್ಯೋಗಿ ಯುವಕರಿಗೆ ಮಾಸಿಕ ಭತ್ಯೆ ನೀಡಲಾಗುವುದು ಎಂದು ಹೇಳಿದೆ.
ಪಕ್ಷದ ರಾಷ್ಟ್ರೀಯ ವಕ್ತಾರ ಪ್ರಕಾಶ್ ಮಜುಂದಾರ್ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಪ್ರಣಾಳಿಕೆಯ ಮುಖ್ಯಾಂಶಗಳು...
* ಮುಂದಿನ ಐದು ವರ್ಷಗಳಲ್ಲಿ 3 ಲಕ್ಷ ಉದ್ಯೋಗ ಸೃಷ್ಟಿ
* 21 ರಿಂದ 40 ವರ್ಷದೊಳಗಿನ ಪ್ರತಿ ನಿರುದ್ಯೋಗಿ ಯುವಕರಿಗೆ ಮಾಸಿಕ ₹ 1 ಸಾವಿರ ನಿರುದ್ಯೋಗಿ ಭತ್ಯೆ ನೀಡಲಾಗುವುದು.
* ಪ್ರತಿ ಮನೆಗೆ ₹ 1 ಸಾವಿರ ಆರ್ಥಿಕ ನೆರವು
* ಅಂಗವಿಕಲರು, ಒಂಟಿ ತಾಯಂದಿರು, ವಿಧವೆಯರು ಹಾಗೂ ಹಿರಿಯ ನಾಗರಿಕರಿಗೆ ಪಿಂಚಣಿ ಹೆಚ್ಚಳ
* ರಾಜ್ಯದ ಎಲ್ಲಾ ರೈತರಿಗೆ ₹ 10 ಸಾವಿರ ಆರ್ಥಿಕ ನೆರವು
* ಇ–ಪಡಿತರ ಕಾರ್ಡ್ಗಳ ವಿತರಣೆ
* ರಾಜ್ಯದ ಹಲವು ಕಡೆ ತಾಯಿ ಹಾಗೂ ಮಕ್ಕಳ ಆರೈಕೆ ಕೇಂದ್ರಗಳ ಸ್ಥಾಪನೆ
* ಮನೆಗಳಿಗೆ ಪೈಪ್ಲೈನ್ ಮೂಲಕ ನೀರು ಸರಬರಾಜು
* ರಾಜ್ಯದ ಎಲ್ಲಾ 6459 ಗ್ರಾಮಗಳಿಗೆ ರಸ್ತೆ
ಮೇಘಾಲಯದಲ್ಲಿ ವಿಧಾನಸಭಾ ಚುನಾವಣೆಯು ಫೆಬ್ರವರಿ 27 ರಂದು ನಡೆಯಲಿದೆ.