ನಂತರ ಮಾತನಾಡಿದ ಮೆಹಬೂಬ ಮುಫ್ತಿ, ಹೈದರ್ಪೋರಾ ಎನ್ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಕಾಶ್ಮೀರಿಗಳು ಹಿಂದೆದೂ ಶರಣಾಗಿಲ್ಲ.ಈಗ ಬಂದೂಕು ತೋರಿಸಿದರೆ ಶರಣಾಗುವುದಿಲ್ಲ. ಹತ್ಯೆಯಾದ ನಾಗರಿಕರನ್ನು ಉಗ್ರರ ತಳಮಟ್ಟದ ಕಾರ್ಯಕರ್ತ (ಒಜಿಡಬ್ಲು) ಎಂದು ಬಿಂಬಿಸುವುದು ಫ್ಯಾಷನ್ ಆಗಿದೆ. ತಳಮಟ್ಟದ ಕಾರ್ಯಕರ್ತ ಎನ್ನಲು ಪೊಲೀಸರ ಬಳಿ ಯಾವುದೇ ಆಧಾರಗಳಿಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.