ಒಂದು ವರ್ಷದಿಂದ ಹಿಂಬಾಲಿಸುತ್ತಿದ್ದ 23 ವರ್ಷದ ಸತೀಶ್ ಎಂಬ ವ್ಯಕ್ತಿ ಸತ್ಯ ಪ್ರಿಯಾ ಎಂಬ ಖಾಸಗಿ ಕಾಲೇಜಿನ ಬಿಕಾಂ ವಿದ್ಯಾರ್ಥಿನಿಯನ್ನು ಚಲಿಸುತ್ತಿದ್ದ ರೈಲಿನ ಮುಂದೆ ತಳ್ಳಿ ಕೊಲೆ ಮಾಡಿದ್ದ. ಸೆಪ್ಟೆಂಬರ್ 13ರಂದು ಘಟನೆ ನಡೆದಿತ್ತು. ಇದಾದ ಒಂದು ದಿನದ ಬಳಿಕ, ಮಗಳ ಸಾವಿನ ದುಃಖ ಭರಿಸಲಾಗದೆ ಅವರ ತಂದೆ ಮಾಣಿಕ್ಯಂ ಆತ್ಮಹತ್ಯೆ ಮಾಡಿಕೊಂಡಿದ್ದರು.