ಇವೆರಡೂ ಕಲ್ಲಿದ್ದಲು ಗಣಿಗಳ ಗಣಿಗಾರಿಕೆಗೆ ಅನುಮತಿ ಕೋರಿ ಒಡಿಶಾ ಸರ್ಕಾರಕ್ಕೆ ರಾಜ್ಯ ಅರ್ಜಿಗಳನ್ನು ಸಲ್ಲಿಸಿದೆ. ಆದರೆ, ಕೇಂದ್ರ ಸರ್ಕಾರವು ಹೊಸದಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಈ ಪ್ರಕ್ರಿಯೆ ಪೂರೈಸಿ ಗಣಿಗಾರಿಕೆಗೆ ಅನುಮತಿ ಸಿಗಬೇಕಾದರೆ ಕನಿಷ್ಠ ಎರಡು ವರ್ಷಗಳಷ್ಟು ತಡವಾಗುತ್ತದೆ. ಆದ್ದರಿಂದ ಆದಷ್ಟು ಬೇಗ ಅನು ಮೋದನೆ ಕೊಡಿಸಬೇಕು ಎಂದು ಯಡಿಯೂರಪ್ಪ ಸಭೆಯಲ್ಲಿ ಮನವಿ ಮಾಡಿದರು. ಮಹಾರಾಷ್ಟ್ರದ ಬಾರಂಜಾ ಕಲ್ಲಿದ್ದಲು ಗಣಿಯಲ್ಲಿ ಕರ್ನಾಟಕಕ್ಕೆ ನಿಗದಿಯಾಗಿದ್ದ ಬ್ಲಾಕ್ನಲ್ಲಿ ಗಣಿಗಾರಿಕೆ ಮಾಡಲು ಸೂಚನೆ ನೀಡಲಾಗಿದೆ. ಆ ರಾಜ್ಯದ ಜತೆಗೆ ತಕರಾರು ಇದ್ದ ಕಾರಣ ಬಹಳ ಕಾಲದಿಂದ ಗಣಿಗಾರಿಕೆ ನಡೆಸಿರಲಿಲ್ಲ.ಈ ಮಧ್ಯೆ ಅಲ್ಲಿ ಕಲ್ಲಿದ್ದಲು ಕಳುವಾಗಿದ್ದರಿಂದ, ಕೇಂದ್ರ ಸರ್ಕಾರ ಕಲ್ಲಿದ್ದಲು ನಿಯಂತ್ರಕರ (ಕೋಲ್ ಕಂಟ್ರೋಲರ್) ಮೂಲಕ ಕಲ್ಲಿದ್ದಲು ಸಂಗ್ರಹದ ಮೌಲ್ಯಮಾಪನ ಮಾಡಿಸಲಾಗಿದೆ. ಮಹಾರಾಷ್ಟ್ರ ಸರ್ಕಾರಕ್ಕೆ ಸಲ್ಲಿಸಬೇಕಿರುವ ರಾಯಧನ ನಿಗದಿಪಡಿಸಿ, ಕಲ್ಲಿದ್ದಿಲಿನ ವಿಲೇವಾರಿ ಪ್ರಕ್ರಿಯೆ ಮತ್ತು ಗಣಿಗಾರಿಕೆ ಪ್ರಾರಂಭಕ್ಕೆ ಅನುವು ಮಾಡಿಕೊಡಲು ಅಲ್ಲಿನ ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದು ಪ್ರಲ್ಹಾದ ಜೋಶಿ ತಿಳಿಸಿದರು.