ನವದೆಹಲಿ: ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ನಿರಂತರ ದುರ್ಬಳಕೆಯಿಂದಾಗಿ ಭ್ರಷ್ಟರಿಗೆ ಪಾರಾಗಲು ನೆರವಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ರಾಜಕೀಯ ವಿರೋಧಿಗಳ ವಿರುದ್ಧ ತನಿಖಾ ಸಂಸ್ಥೆಗಳ ನಿರಂತರ ದುರ್ಬಳಕೆಯಿಂದಾಗಿ ಏಜೆನ್ಸಿ ಮೇಲಿನ ನಂಬಿಕೆ ಕುಗ್ಗಿದ್ದು, ಭ್ರಷ್ಟರಿಗೆ ಪಾರಾಗಲು ನೆರವಾಗುತ್ತಿದೆ ಎಂದು ಹೇಳಿದ್ದಾರೆ.
ಏಜೆನ್ಸಿಗಳ ಇಂತಹ ಕ್ರಮದಿಂದಾಗಿ ನ್ಯಾಯಯುತವಾದ ವಿಚಾರಣೆಗಳು ಸಹ ಅನುಮಾನದಡಿಯಲ್ಲಿ ಬರುತ್ತವೆ. ಸಿಬಿಐ ದುರ್ಬಳಕೆಯಿಂದಾಗಿ ಭ್ರಷ್ಟರು ಪಾರಾಗುತ್ತಾರೆ. ಅಲ್ಲದೆ ಪ್ರಾಮಾಣಿಕರು ಬೆಲೆ ತೆರುತ್ತಾರೆ ಎಂದು ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿದ್ದ ಸಿಬಿಐ, ಶುಕ್ರವಾರ ದೆಹಲಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಐಎಎಸ್ ಅಧಿಕಾರಿ ಗೋಪಿ ಕೃಷ್ಣ ಸಹಿತ 21 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
एजेन्सीयों के निरंतर दुरुपयोग का एक बड़ा नुक़सान यह भी होता है कि जब वह एजेन्सी सही काम भी करे तब भी उसके कदम को शक की दृष्टि से देखा जाता है। ऐसे में भ्रष्ट लोग दुरुपयोग की दुहाई देकर बच निकलते हैं और जो ईमानदारी से जनता के मुद्दे उठाते हैं, वो दुरुपयोग का शिकार होते रहते हैं