ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ ಠಾಕ್ರೆ ಹೇಳಿಕೆ ಖಂಡಿಸಿ ಪಕ್ಷಕ್ಕೆ ಇಬ್ಬರು ರಾಜೀನಾಮೆ

Last Updated 5 ಏಪ್ರಿಲ್ 2022, 12:33 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆಗೆಯಬೇಕು ಎಂಬ ಮಹಾರಾಷ್ಟ್ರ ನವ ನಿರ್ಮಾಣ ಸೇನಾದ (ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ ಹೇಳಿಕೆ ವಿರೋಧಿಸಿ ಪಕ್ಷದ ಉಪಾಧ್ಯಕ್ಷಶೈಬಾಜ್ ಪಂಜಾಬಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಮೂಲಕ ರಾಜ್‌ಠಾಕ್ರೆ ಹೇಳಿಕೆ ವಿರೋಧಿಸಿ ಕಳೆದೆರಡು ದಿನಗಳಿಂದ ಇಬ್ಬರು ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದಂತಾಗಿದೆ. ಸೋಮವಾರ ಪುಣೆಯ ಪಕ್ಷದ ಶಾಖಾ ಅಧ್ಯಕ್ಷ ಮಜೀದ್ ಶೇಖ್‌ ರಾಜೀನಾಮೆ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶೈಬಾಜ್, 'ಎಂಎನ್ಎಸ್ ಆರಂಭವಾದ ದಿನದಿಂದಲೂ ನಾನು ಪಕ್ಷದಲ್ಲಿದ್ದೆ. ಆದರೆ ಇದೀಗ ಮಸೀದಿಯ ಆಜಾನ್ ಹೇಳಿಕೆಯಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ಇಂಥ ಹೇಳಿಕೆಗಳು ಹೊರಬಿದ್ದ ಬಳಿಕವೂ ಪಕ್ಷದಲ್ಲೇ ಮುಂದುವರಿದರೆ, ಜನರನ್ನು ಎದುರಿಸಲಾಗದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT